ಸಾಯಂಕಾಲ ಆದ್ರೂ ಬರಲಿಲ್ಲವೆಂದು ಹೆಂಡ್ತಿ ಕೆಲ್ಸ ಮಾಡುವ ಜಾಗಕ್ಕೆ ಹೋದ ಗಂಡ..! ಹೆಂಡ್ತಿ ಕಂಡಿದ್ದು ಹೀಗೆ

ಸಾಯಂಕಾಲ ಆದ್ರೂ ಬರಲಿಲ್ಲವೆಂದು ಹೆಂಡ್ತಿ ಕೆಲ್ಸ ಮಾಡುವ ಜಾಗಕ್ಕೆ ಹೋದ ಗಂಡ..! ಹೆಂಡ್ತಿ ಕಂಡಿದ್ದು ಹೀಗೆ

ಅಂಗನವಾಡಿ ಸಿಬ್ಬಂದಿಯಾಗಿ, ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದ ಒಬ್ಬ ಮಹಿಳೆ ಇದೀಗ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಹೌದು, ಈಕೆಯ ಹೆಸರು ಪ್ರಜ್ಞೆನ ಪರಿಮಿತ ದಾಸ್ ಎಂದು. ಈ ಘಟನೆ ನಡೆದಿರೋದು ಒಡಿಶಾದ ಬಾಲಸೋರ್ ಜಿಲ್ಲೆಯ ಕಾಂತಪದ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಮಹಾರಾಜಪೂರ್ ಎಂಬ ಪ್ರದೇಶದ ಒಂದು ಅಂಗನವಾಡಿಯಲ್ಲಿ. ಕೆಲಸಕ್ಕೆ ಹೋದವರು ಎಲ್ಲರೂ ಮರಳಿ ಮನೆಗೆ ಬರುತ್ತಿದ್ದರು.

ಅದನ್ನೇ ಗಮನಿಸುತ್ತಿದ್ದ ಈಕೆಯ ಪತಿ, ಮನೆಯಲ್ಲಿ ತುಂಬಾನೆ ಹೊತ್ತು ಈಕೆಗಾಗಿ ಕಾದಿದ್ದಾನೆ. ಆದರೆ ಈ ಮಹಿಳೆ ಕತ್ತಲಾದರೂ ಕೂಡ ಬಾರದಿದ್ದನ್ನು ಗಮನಿಸಿ ಸಾಯಂಕಾಲ ಆದರೂ ನನ್ನ ಹೆಂಡತಿ ಬರಲಿಲ್ಲ ಎಂದು ಈಕೆ ಪತಿ ಬಿಸ್ಮಿತ್ ರಂಜನ್ ದಾಸ್, ಅಂಗನವಾಡಿಗೆ ಹೋಗಿ ನೋಡಿದ್ದಾನೆ. ಆಗ ಈತನ ಹೆಂಡತಿ ಪ್ರಗ್ಯನ ಪರಿಮಿತ ದಾಸ್ ಅಂಗನವಾಡಿಯಲ್ಲಿ ನೇಣು ಬಿಗಿದ ಪರಿಸ್ಥಿತಿಯಲ್ಲಿ ಕಂಡುಬಂದಿದ್ದಾಳೆ. ಇದನ್ನ ನೋಡಿದ ಹುಡುಗಿ ತಂದೆ ಬಿದ್ಯಾದರ ದಾಸ್, ನನ್ನ ಮಗಳಿಗೆ ಚಿತ್ರ ಹಿಂಸೆ ಗಂಡನ ಮನೆಯಲ್ಲಿ ಕೊಡುತ್ತಿದ್ದರು..ನನ್ನ ಅಳಿಯ ವಿಪರೀತ ಮಧ್ಯದವ್ಯಸನಿ, ಆತನ ತಾಯಿ ಕೂಡ ನನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿರಲಿಲ್ಲ.   

ಇವರಿಬ್ಬರದು ಲವ್ ಮ್ಯಾರೇಜ್, ಲವ್ ಮ್ಯಾರೇಜ್ ಆಗಿದ್ದಕ್ಕೆ ಇವರ ಮನೆಯಲ್ಲಿ ನನ್ನ ಮಗಳನ್ನು ಯಾರು ಸಹ ಸೇರುತ್ತಿರಲಿಲ್ಲ, ಅವರೇ ಈ ರೀತಿ ಕೊಂದುಹಾಕಿ ಇಲ್ಲಿ ತಂದು ಫ್ಯಾನ್ ಗೆ ನೇಣು ಹಾಕಿದ್ದಾರೆ..ಇಲ್ಲವಾದರೆ ಇವರ ಚಿತ್ರ ಹಿಂಸೆ ತಾಳಲಾರದೆ ನನ್ನ ಮಗಳೇ ಈ ರೀತಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಏನೇ ಆಗಲಿ ನನ್ನ ಮಗಳ ಸಾವಿಗೆ ಗಂಡನ ಮನೆಯವರೆ ಕಾರಣ ಎಂದು ಹುಡುಗಿ ತಂದೆ ಆರೋಪ ಮಾಡುತ್ತಿದ್ದಾರೆ. ಹಾಗೆ ಹುಡುಗಿಯ ತಾಯಿ ಆದ ಸರಸ್ವತಿ ದಾಸ್ ಅವರು, ನನ್ನ ಮಗಳು ಮಾನಸಿಕವಾಗಿ ತುಂಬಾ ಗಟ್ಟಿಯಾಗಿದ್ದಳು...ಯಾವುದಕ್ಕೂ ಸಹ ಎಂದೂ ಅಂಜುತ್ತಿರಲಿಲ್ಲ, ಅಂತಹವಳಿಗೆ ಇವರು ಹೆಚ್ಚು ಚಿತ್ರಹಿಂಸೆ ಕೊಟ್ಟು ಸಾಯುವಂತೆ ಮಾಡಿದ್ದಾರೆ ಇವರಿಗೆ ಶಿಕ್ಷೆ ಆಗಬೇಕು ಎಂದು ಹುಡುಗಿಯ ತಾಯಿಯೂ ಸಹ ಅತ್ತ ಪೊಲೀಸರಿಗೆ ಒತ್ತಾಯ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಬಳಿಕ ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಯುವತಿ ಗಂಡ ಮತ್ತು ಗಂಡನ ತಾಯಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ..