ಮಗಳ ಸಾವಿನ ಬಗ್ಗೆ ಚಿಕ್ಕಪ್ಪ ಹರಿಪ್ರಸಾದ್ ಬೇಸರ..! ಮಾಧ್ಯಮಕ್ಕೆ ಆ ಕೆಲ್ಸ ಮಾಡಬೇಡಿ ಎಂದಿದ್ದೆಕೆ..?

ಮಗಳ ಸಾವಿನ ಬಗ್ಗೆ ಚಿಕ್ಕಪ್ಪ ಹರಿಪ್ರಸಾದ್ ಬೇಸರ..! ಮಾಧ್ಯಮಕ್ಕೆ ಆ ಕೆಲ್ಸ ಮಾಡಬೇಡಿ ಎಂದಿದ್ದೆಕೆ..?

ಸ್ಯಾಂಡಲ್ ವುಡ್ ನಲ್ಲಿ ಇದೀಗ ಮತ್ತೊಂದು ಆಘಾತ ಎದುರಾಗಿದ್ದು ಖ್ಯಾತ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ಅತ್ತ ಬ್ಯಾಂಕಾಕ್ ನಲ್ಲಿ. ಈ ವಿಚಾರ ಎಲ್ಲೆಡೆ ಹೊರಗಡೆ ಬರುತ್ತಿದ್ದಂತೆ ವಿಜಯ್ ರಾಘವೇಂದ್ರ ಅವರ ಅಭಿಮಾನಿಗಳು, ವಿಜಯ ರಾಘವೇಂದ್ರ ಅವರ ಕುಟುಂಬಸ್ಥರು, ಸ್ನೇಹಿತರು, ಇಡೀ ಕನ್ನಡ ಚಿತ್ರರಂಗವೇ ಎಲ್ಲರೂ ಕೂಡ ಕಣ್ಣೀರು ಹಾಕುತ್ತಿದ್ದಾರೆ..ಅತಿ ಸಣ್ಣ ವಯಸ್ಸಿನಲ್ಲಿ ವಿಜಯ್ ಅವರ ಪತ್ನಿ ಸ್ಪಂದನ ಅವರು ಇಹಲೋಕ ತ್ಯಜಿಸಿರುವುದು ಎಲ್ಲರಿಗೂ ನಿಜಕ್ಕೂ ಅಚ್ಚರಿಯಾಗಿದೆ. ಇಷ್ಟು ಸಣ್ಣ ವಯಸ್ಸಿಗೆ ಅದೆಂತಹ ಹೃದಯಘಾತ ಇವರಿಗೆ ಸಂಭವಿಸಿತು, ಯಾವುದೇ ಅನಾರೋಗ್ಯ ಎಂದಿಗೂ ಕೂಡ ಇವರಿಗೆ ಕಾಣಿಸಿರಲಿಲ್ಲ ಎಂದು ಹಲವರು ಹೇಳುತ್ತಿದ್ದಾರೆ.

ಅದು ಹೇಗೆ ಇವರು ಹೃದಯಘಾತಕ್ಕೆ ತುತ್ತಾದರೂ ಎಂಬುದು ಕೆಲವರ ವಾದ. ಇನ್ನೂ ಕೆಲವರು ಚರ್ಚೆ ಮಾಡುತ್ತಿದ್ದಾರೆ. ಹೀಗಿರುವಾಗ ಸ್ಪಂದನ ಅವರ ಚಿಕ್ಕಪ್ಪ ಬಿ ಕೆ ಹರಿಪ್ರಸಾದ್ ಅವರು ಪ್ರತಿಕ್ರಿಯೆ ನೀಡಿದ್ದು, ತುಂಬಾ ನೋವಿನಲ್ಲಿ ತಮ್ಮ ಮಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ ಎಂದು ನಾವು ಹೇಳಬಹುದು. 'ಅವರು ಯಾವಾಗ ಬ್ಯಾಂಕಾಕ್ಕೆ ಹೋದರು ಎಂಬುದಾಗಿ ನನಗೆ ಮಾಹಿತಿ ಇಲ್ಲ. ಆದರೆ ಕಸಿನ್ಸ್ ಮತ್ತೆ ಕಸಿನ್ಸ್ ಸ್ನೇಹಿತರೊಟ್ಟಿಗೆ  ಬ್ಯಾಂಕಾಕ್ ಗೆ ಹೋಗಿದ್ದಾಳೆ. ವಿಜಯ್ ಇಲ್ಲೇ ಶೂಟಿಂಗ್ ಅಲ್ಲಿ ಇದ್ದ. ಅಲ್ಲಿ ಹೃದಯಘಾತದಿಂದ ಸಾವನ್ನಪ್ಪಿದ್ದಾಳೆ. ನೀವು ಊಹಾಪೋಹಗಳಿಗೆ ತಲೆಕೆಡಿಸಿಕೊಳ್ಳಬೇಡಿ, ಇಲ್ಲ ಸಲ್ಲದ ವಿಚಾರಗಳನ್ನು ಹಬ್ಬಿಸಬೇಡಿ, ಅಲ್ಲಿಯ ವೈಧ್ಯರು ಸ್ಪಂದನ ಬಗ್ಗೆ ರಿಪೋರ್ಟ್ ಕಳಿಸುತ್ತಾರೆ.     

ಆ ರಿಪೋರ್ಟ್ ನಲ್ಲಿ ಯಾವ ವರದಿ ಬಂದಿರುತ್ತದೆಯೋ ಅದನ್ನೇ ಬೇಕಾದರೆ ನಂತರದಲ್ಲಿ ಪ್ರಸಾರ ಮಾಡಿರಿ, ನಮಗೆ ಯಾವ ಅಭ್ಯಂತರವೂ ಇಲ್ಲ. ಈಗ ಇಲ್ಲಸಲ್ಲದ ಊಹಾಪೋಹಗಳಿಗೆ ಕಿವಿ ಕೊಟ್ಟು ಪ್ರಚಾರ ಮಾಡಬೇಡಿ, ಅವಳು ಹೆಣ್ಣು ಮಗಳು ಅವರದೇ ಆದ ಪರ್ಸನಲ್ ವಿಚಾರ ಇರುತ್ತೆ, ತಪ್ಪು ಮಾಹಿತಿಯನ್ನು ರವಾನಿಸಬೇಡಿ' ಎಂದು ಬಿ ಕೆ ಹರಿಪ್ರಸಾದ್ ಅವರು ಖಡಕ್ಕಾಗಿಯೆ ಮಾದ್ಯಮ ಮಿತ್ರರಿಗೆ ಪ್ರತಿಕ್ರಿಸಿದ್ದಾರೆ. ಹಾಗೆ 'ಅಲ್ಲಿಂದ ಸ್ಪಂದನ ಅವರ ಮೃತ ದೇಹವನ್ನು ತರುವ ವ್ಯವಸ್ಥೆ ಈಗ ಮಾಡಲಾಗುತ್ತಿದೆ, ನಾಳೆ ಇಲ್ಲಿಗೆ ತರಲಾಗುತ್ತಿದೆ, ನಾನು ಕೂಡ ಹೋಗುತ್ತಿದ್ದೇನೆ' ಎಂಬುದಾಗಿ ನೋವಿನಲ್ಲಿಯೇ ಪ್ರತಿಕ್ರಿಯೆ ನೀಡಿದ್ದಾರೆ..ಹಾಗೆ ಎಲ್ಲಿ ಸ್ಪಂದನ ಅವರ ಅಂತ್ಯಕ್ರಿಯೆ ಮಾಡಲಾಗುತ್ತೆ ಎನ್ನುವ ಪ್ರಶ್ನೆಗೆ 'ಅವರ ಕುಟುಂಬದವರು ಏನು ನಿರ್ಧಾರವನ್ನ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕು, ಇಲ್ಲಿಗೆ ಬಂದ ಮೇಲೆ ಅದರ ವಿಚಾರ ಮಾಡುತ್ತೇವೆ' ಎಂದು ಹೇಳಿದ್ದಾರೆ. ಇನ್ನೂ ಏನೆನೆಲ್ಲ ಅವರ ಚಿಕ್ಕಪ್ಪ ಹರಿಪ್ರಸಾದ್ ಅವರು ಹೇಳಿದರು ಗೊತ್ತ.? ಇಲ್ಲಿದೆ ನೋಡಿ ವಿಡಿಯೋ.

ಹಾಗೆ ಸ್ಪಂದನ ಅವರ ಅಗಲಿಕೆಯ ನೋವನ್ನ, ಆ ದೇವರು ನಟ ವಿಜಯ್ ರಾಘವೇಂದ್ರ ಹಾಗೂ ಶಿವರಾಂ ಅವರ ಕುಟುಂಬಕ್ಕೆ ನೋವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ನೀವು ಕೂಡ ಕೇಳಿಕೊಳ್ಳಿ. ಇದನ್ನು ಬಿಟ್ಟರೆ ಬೇರೆ ಏನು ಹೇಳಲಿಕ್ಕಾಗದು ನಾವು. ದೇವರು ಕಠಿಣ ನಿರ್ಧಾರ ತೆಗೆದುಕೊಂಡಿದ್ದಾನೆ. ದೇವರು ತುಂಬಾ ಕ್ರೂರಿ ಎಂದು ಇಂಥ ಸಂದರ್ಭದಲ್ಲಿ ಸಾಕಷ್ಟು ಜನರು ಹೇಳುತ್ತಿದ್ದಾರೆ..ಒಮ್ಮೊಮ್ಮೆ ದೇವರು ಇದ್ದಾನ ಎನ್ನುವ ಪ್ರಶ್ನೆಗೆ ಪ್ರಶ್ನೆಯಾಗಿಯೇ ಉಳಿಯುವಂತಹ ಘಟನೆ ಇದಾಗಿದೆ..

( video credit : news 18 kannada )