ನಟಿ ಭಾರತಿ ಅವರಿಗೆ ಎದುರಾದ ಆರೋಗ್ಯ ಸಮಸ್ಯೆ..! ಅನಿರುದ್ ಈ ಬಗ್ಗೆ ಹೇಳಿದ್ದೇನು

ನಟಿ ಭಾರತಿ ಅವರಿಗೆ ಎದುರಾದ ಆರೋಗ್ಯ ಸಮಸ್ಯೆ..! ಅನಿರುದ್ ಈ ಬಗ್ಗೆ ಹೇಳಿದ್ದೇನು

ಸ್ಯಾಂಡಲ್ ವುಡ್ನ ಬಹುಮುಖ ಪ್ರತಿಭೆ, ದಕ್ಷಿಣ ಭಾರತದ ಖ್ಯಾತ ನಟಿಯಾಗಿ ಮಿಂಚಿದ ನಟಿ ಲೀಲಾವತಿ ಅವರು ಇತ್ತೀಚಿಗಷ್ಟೇ ಇಹಲೋಕ ತ್ಯಜಿಸಿದರು. ಇದು ಎಲ್ಲರಿಗೂ ಗೊತ್ತಿರುವ ವಿಚಾರ.  ಹೌದು, ಸುಮಾರು 86 ವರ್ಷಗಳ ಕಾಲ ಬದುಕಿದ ನಟಿ ಲೀಲಾವತಿ ಅವರು ಸಾಕಷ್ಟು ಜನರಿಗೆ ಸ್ಪೂರ್ತಿಯಾಗಿದ್ದಾರೆ. ಅವರ ಸಿನಿರಂಗದ ದಾರಿ ಅವರು ವೈಯಕ್ತಿಕವಾಗಿ ಅನುಭವಿಸಿದಂತಹ ಕೆಲವು ನೋವುಗಳು, ಕಡು ಬಡತನದಲ್ಲಿ ಹುಟ್ಟಿದರೂ ಅವರಿಗೆ ಇದ್ದ ನಟನೆ ಮೇಲಿನ ಆಸಕ್ತಿ ಎಲ್ಲವೂ ಕೂಡ ಒಂದು ದೊಡ್ಡ ಸಾಧನೆಯೇ ಸರಿ..

ತಮ್ಮದೇ ಆದ ವಿಭಿನ್ನ ಅಭಿನಯದಿಂದ ಸುಮಾರು ವರ್ಷಗಳ ಕಾಲ ಎಲ್ಲರನ್ನು ರಂಜಿಸಿದ್ದರು. ದೊಡ್ಡ ಹೆಸರು ಮಾಡಿದ್ದರು. ನಟಿ ಲೀಲಾವತಿಯವರು ಇತ್ತೀಚಿಗೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ನಮ್ಮನ್ನು, ಕನ್ನಡ ಚಿತ್ರರಂಗವನ್ನು ಅವರ ಪ್ರೀತಿಯ ಮಗ ವಿನೋದ್ ರಾಜ್ ಅವರನ್ನು ಬಿಟ್ಟು ಬಾರದ ಊರಿಗೆ ಪಯಣ ಬೆಳೆಸಿದರು.. ಇದರಿಂದ ಕನ್ನಡ ಚಿತ್ರರಂಗದ ಕೆಲ ಗಣ್ಯರು ಸಂತಾಪ ಸೂಚಿಸಿದ್ದು ಇದೆ. ಹೀಗಿರುವಾಗ ಅವರ ಅಗಲಿಕೆ ಬೆನ್ನಲ್ಲಿಯೇ ನಮ್ಮ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಆಘಾತ ಎದುರಾಗಿದೆ ಗೆಳೆಯರೇ.

ಖ್ಯಾತ ನಟ ಡಾಕ್ಟರ್ ಸಾಹಸಸಿಂಹ ವಿಷ್ಣುವರ್ಧನ್ ಅವರ ಮಡದಿ ಭಾರತೀ ವಿಷ್ಣುವರ್ಧನ್ ಅವರ ಆರೋಗ್ಯದಲ್ಲಿ ಏರುಪೇರು ಕಂಡಿರುವುದಾಗಿ ತಿಳಿದು ಬಂದಿದೆ..ಎರಡು ತಿಂಗಳಿಂದ ಭಾರತಿ ವಿಷ್ಣುವರ್ಧನ್ ಅವರು ಕೂಡ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ ಎಂದು ಕೇಳಿ ಬಂದಿದೆ. ಹಾಸಿಗೆ ಬಿಟ್ಟು ಮೇಲೆ ಎದ್ದೇಳಲು ಆಗುತ್ತಿಲ್ಲವಂತೆ. ಜೊತೆಗೆ ಊಟ ಸಹ ಹೆಚ್ಚು ಸೇರುತ್ತಿಲ್ಲ ಅವರ ಮಂಡಿ ನೋವಿನಿಂದ ಅಮ್ಮ ತುಂಬಾನೇ ಅನಾರೋಗ್ಯಕ್ಕೆ ಈಡಾಗಿದ್ದಾರೆ ಎಂದು ಅವರ ಪ್ರೀತಿಯ ಅಳಿಯ ನಟ ಅನಿರುದ್ ಅವರು ಈ ವಿಚಾರವನ್ನು ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಡಿಯೋ ಮೂಲಕ ನಮಗೆ ಅವರ ಅನಾರೋಗ್ಯ ಮಾಹಿತಿ ಲಭ್ಯವಾಗಿದೆ..ಹೌದು ಈ ವಯೋಸಹಜ ಕಾಯಿಲೆಯಿಂದ ನಟಿ ಭಾರತೀ ವಿಷ್ಣು ವರ್ಧನ್ ಅವರು ಕೂಡ ಅನಾರೋಗ್ಯಕ್ಕೆ ತುತ್ತಾಗಿದ್ದಾರಂತೆ. ಇದೀಗ ಅವರಿಗೆ ವಿಪರೀತ ಮಂಡಿ ನೋವು ಹೆಚ್ಚಾಗಿದೆಯಂತೆ. ಈ ಸಮಸ್ಯೆಯಿಂದ ಭಾರತಿ ಅವರು ಆದಷ್ಟು ಬೇಗನೆ ಹೊರಬರಲಿ ಎಂದು ಎಲ್ಲರೂ ಕೂಡ ಹರಸಿ. ಅವರು ಬೇಗನೆ ಗುಣಮುಖರಾಗಲಿ ಎಂದು ನೀವೂ ಸಹ ಶುಭ ಕೋರಿ, ಇಲ್ಲಿದೆ ನೋಡಿ ಆ ವಿಡಿಯೋ. ಯಾವ ಯಾವ ವಿಚಾರಗಳನ್ನು ಭಾರತಿ ವಿಷ್ಣುವರ್ಧನ್ ಅವರ ಬಗ್ಗೆ ಹಂಚಿಕೊಂಡಿದ್ದಾರೆ ನಟ ಅನಿರುದ್ ಅವರು ಎಂದು ನೋಡಿ. ಧನ್ಯವಾದಗಳು...