5ಸಾವಿರ ಕೋಟಿ ಮದುವೆ ಮಾಡುವವನ ನಡುವೆ 1500ಕೋಟಿ ದಾನ ಕೊಟ್ಟ ಶ್ರೀಮಂತ! ಆತ ಯಾರು ಹಾಗೂ ಕೊಟ್ಟಿದ್ದು ಯಾಕೆ ಗೊತ್ತಾ?

5ಸಾವಿರ ಕೋಟಿ ಮದುವೆ ಮಾಡುವವನ ನಡುವೆ 1500ಕೋಟಿ ದಾನ ಕೊಟ್ಟ ಶ್ರೀಮಂತ! ಆತ ಯಾರು ಹಾಗೂ ಕೊಟ್ಟಿದ್ದು ಯಾಕೆ ಗೊತ್ತಾ?

ಅಂಬಾನಿ ಮನೆತನವು ಭಾರತದ ಅತ್ಯಂತ ಶ್ರಿಮಂತ ಮತ್ತು ಪ್ರಭಾವಶಾಲಿ ಕುಟುಂಬಗಳಲ್ಲಿ ಒಂದಾಗಿದೆ. ಇವರ ವ್ಯವಹಾರಗಳು ಪ್ರಾಮುಖ್ಯವಾಗಿ ತೈಲ ಮತ್ತು ಅನಿಲ, ರಾಸಾಯನಿಕಗಳು, ಇನ್ಫ್ರಾಸ್ಟ್ರಕ್ಚರ್, ರಿಟೇಲ್, ದೂರಸಂಪರ್ಕ, ಮತ್ತು ಮಾಧ್ಯಮ ಕ್ಷೇತ್ರಗಳಲ್ಲಿ ವ್ಯಾಪಿಸಿಕೊಂಡಿವೆ. ಧೀರುಭಾಯಿ ಅಂಬಾನಿ  ಈ ಕುಟುಂಬದ ಸ್ಥಾಪಕರು ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ (RIL) ಸಂಸ್ಥಾಪಕರು ಎಂದು ಹೇಳಬಹುದು. ಇನ್ನು ಐಎಬ್ರ ನಂತರ ಮುಕೇಶ್ ಅಂಬಾನಿ  ಧೀರುಭಾಯಿ ಅಂಬಾನಿಯವರ ಮಗ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ. ಅವರು ಟೆಲಿಕಾಂ (ಜಿಯೋ), ರಿಟೇಲ್, ಮತ್ತು ಇತರ ಉಪಕ್ರಮಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.ಇನ್ನು ಇತ್ತೀಚೆಗೆ ಇವರ ಮನೆತನದ ಹೆಸರು ಎಲ್ಲೆಡೆ ಭಾರಿ ಸದ್ದು ಮಾಡುತ್ತಿದೆ ಎಂದು ಹೇಳಬಹುದು. ಏಕೆಂದರೆ  ಮುಕೇಶ್ ಮತ್ತು ನೀತಾ ಅಂಬಾನಿಯವರ ಕೊನೆಯ ಮಗನ ಮದುವೆಯ ಖರ್ಚು ವೆಚ್ಚದ ಸಲುವಾಗಿ. 

ಇನ್ನು 2023 ರಿಂದ ಶುರುವಾದ ಇವರ ಮದುವೆಯ ಅಬ್ಬರ  ಈ ತಿಂಗಳು ಮುಗಿದಿದೆ. ಇನ್ನು ಅನಂತ್ ಅಂಬಾನಿ ಅವರು ರಾಧಿಕಾ ಮರ್ಚೆಂಟ್ ಅವರೊಂದಿಗೆ ಮದುವೆಯಾದರು. ಈ ಮದುವೆಯು ಅತ್ಯಂತ ವೈಭವದಿಂದ ನಡೆಯಿತು, ಮತ್ತು ಅದರಲ್ಲಿ ಬಾಲಿವುಡ್ ತಾರೆಗಳು, ಉದ್ಯಮಿಗಳ ಪ್ರಮುಖ ವ್ಯಕ್ತಿಗಳು, ಮತ್ತು ರಾಜಕೀಯ ನಾಯಕರು ಭಾಗವಹಿಸಿದ್ದರು. ಮದುವೆಯ ಪ್ರಾರಂಭ ಕಾರ್ಯಕ್ರಮವು ಮುಂಬೈಯಲ್ಲಿ ಜಿಯೋ ಸೊಂಟರ್‌ನಲ್ಲಿ ನೆರವೇರಿತು, ಮತ್ತು ಇದರಲ್ಲಿ ಪರಂಪರಾ ಪೂರ್ವಕ ವಿಧಿಗಳು, ಸಂಸ್ಕೃತಿಯ ಕಾರ್ಯಕ್ರಮಗಳು, ಮತ್ತು ವಿವಿಧ ಪ್ರೀತಿಯುಳ್ಳ ಬಿಂಬಗಳು ಸೇರಿದ್ದವು. ಮದುವೆಯ ಅಂದಾಜು ಖರ್ಚು ಲಕ್ಷಾಂತರ ಡಾಲರ್‌ಗಳಲ್ಲಿ ನಿಗದಿಯಾಗಿತ್ತು, ಮತ್ತು ಇದು ಅಂಬಾನಿ ಕುಟುಂಬದ ಬೃಹತ್ ಆಸ್ತಿ ಮತ್ತು ವೈಭವವನ್ನು ತೋರಿಸಿತು.

ಇನ್ನು ಇವರ ವೈಭೋಗವನ್ನು ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ನ್ಯೂಸ್ ಪೇಪರ್ ಗಳಲ್ಲಿ ಬರೆದಿದ್ದೆ ಬರೆದದ್ದು ಇದರಿಂದ ಸಾಮಾನ್ಯರಾದ ಯಾರೊಬ್ಬರಿಗೂ ಕೊಡ ಯಾವ ಲಾಭ ಕೊಡ ಆಗಲಿಲ್ಲ ಎಂದ್ರೆ ತಪ್ಪಾಗಲಾರದು. ಆದ್ರೆ ಈ ಮಧ್ಯೆ ಅಜೀಂ ಪ್ರೇಮ್ ಜಿ ಸುದ್ದಿ ಆಗಲೇ ಇಲ್ಲ. ಇವರು ತಮ್ಮ ಆಸ್ತಿಯಲ್ಲಿ 1500ಕೋಟಿಯನ್ನು 55ಲಕ್ಷಕ್ಕೂ ಅಧಿಕ ಬಡ ಮಕ್ಕಳ ಶಾಲೆಗೆ ದಾನ ಮಾಡಿ ವಾರದಲ್ಲಿ ಆರು ದಿನಗಳ ಕಾಲ ಮೊಟ್ಟೆ ನೀಡಿ ಪೌಷ್ಟಿಕ ಆಹಾರ ನೀಡಬೇಕೆಂದು ದೇಣಿಗೆಯಾಗಿ ನೀಡಿದ್ದಾರೆ. ಇನ್ನು ಶ್ರೀಮಂತರನ್ನು ಕರೆಸಿ ಅದ್ದೂರಿಯಾಗಿ ಊಟ ಹಾಕುವ ಹಣದ ಶ್ರೀಮಂತನಿಗಿಂತ ತನ್ನ ಹಣದಲ್ಲಿ ಬಡವರ ಬಗ್ಗೆ ಕೊಡ ಆಲೋಚನೆ ಮಾಡುವ ಈ ಹೃದಯ ಶ್ರೀಮಂತನನ್ನು ಜನ ಗುರುತಿಸದೇ ಇರುವುದು ನಿಜಕ್ಕೂ ಬೇಸರದ ಸಂಗತಿ.