12 ದಿನಗಳ ಬಳಿಕ ಮೊದಲ ರಿಯಾಕ್ಷನ್ ಕೊಟ್ಟ ದಚ್ಚು! ಆ ರಿಯಾಕ್ಷನ್ ಏನು ಗೊತ್ತಾ?

12 ದಿನಗಳ ಬಳಿಕ ಮೊದಲ ರಿಯಾಕ್ಷನ್ ಕೊಟ್ಟ ದಚ್ಚು! ಆ ರಿಯಾಕ್ಷನ್ ಏನು ಗೊತ್ತಾ?

ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ನಟ ದರ್ಶನ್ ತೂಗುದೀಪ ಅವರನ್ನು ಬಂಧಿಸಲಾಗಿದೆ.  ಈ ಘಟನೆಯಲ್ಲಿ ದರ್ಶನ್, ಅವರ ಸಹನಟಿ ಪವಿತ್ರಾ ಗೌಡ ಮತ್ತು ಹಲವರು ಭಾಗಿಯಾಗಿದ್ದಾರೆ.  ಬೆಂಗಳೂರಿನಲ್ಲಿ ರೇಣುಕಾ ಸ್ವಾಮಿ ಶವವಾಗಿ ಪತ್ತೆಯಾಗಿದ್ದು, ತನಿಖೆಯಿಂದ ಅವರು ಪವಿತ್ರಾ ಗೌಡ ಅವರಿಗೆ ಆಕ್ಷೇಪಾರ್ಹ ಸಂದೇಶಗಳನ್ನು ಕಳುಹಿಸಿದ್ದರು ಎಂದು ತಿಳಿದುಬಂದಿದೆ, ಇದು ಅವರ ಅಪಹರಣ ಮತ್ತು ಕೊಲೆಗೆ ಕಾರಣವಾಯಿತು. ರೇಣುಕಾ ಸ್ವಾಮಿಯನ್ನು ಆಮಿಷವೊಡ್ಡಿ ಶೆಡ್‌ಗೆ ಕರೆದೊಯ್ದು ಚಿತ್ರಹಿಂಸೆ ನೀಡಿ ಸಾಯಿಸಲಾಯಿತು, ಸಾಕ್ಷ್ಯಾಧಾರಗಳೊಂದಿಗೆ ದರ್ಶನ್ ಅಪರಾಧದ ಸಂಚು ರೂಪಿಸುವಲ್ಲಿ ತೊಡಗಿದ್ದರು.  

ಇನ್ನೂ ದರ್ಶನ್ ಮೇಲೆ ಬಂದಿರುವ ಆರೋಪದಿಂದ ಕೊಲೆಯಾಗಿರುವ ರೇಣುಕಾ ಸ್ವಾಮಿ ಅವರ ದೇಹದಲ್ಲಿ ಅನೇಕ ಗಾಯಗಳಿದ್ದವು ಮತ್ತು ಅವನ ದೇಹವನ್ನು ಚಂಡಮಾರುತದ ನೀರಿನ ಚರಂಡಿಯ ಬಳಿ ವಿಲೇವಾರಿ ಮಾಡಲಾಯಿತು  ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ ಹಲವರು ಪ್ರಸ್ತುತ ಪೊಲೀಸ್ ಕಸ್ಟಡಿಯಲ್ಲಿದ್ದು ತನಿಖೆ ಮುಂದುವರೆದಿದೆ. ಇನ್ನೂ ನೆನ್ನೆ ಕೋರ್ಟ್ ಮುಗಿದ ನಂತರ ಪವಿತ್ರ ಗೌಡ ಸೇರಿದಂತೆಆರು ಮಂದಿ ಪರಪ್ಪನ ಅಗ್ರಹಾರ ಜೈಲು ಸೇರಿದರು. ಇನ್ನೂ ಇಂದು ದರ್ಶನ್ ಅವರು ಮತ್ತೆ ಕೋರ್ಟ್ ಗೆ ಹಾಜರು ಪಡಿಸಿ ಅಲ್ಲಿಯ ನ್ಯಾಯಾಧೀಶರು ದರ್ಶನ  ಅವರಿಗೆ ಜೈಲಿನಲ್ಲಿ ಯಾವುದಾದರೂ ತೊಂದರೆ ಹಾಗೂ ಮೇಡಿಕಲ್ ಟ್ರೀಟ್ಮೆಂಟ್ ಅಗತ್ಯ ವಿದೆಯಾ ಎಂದು ಪ್ರಶ್ನೆ ಮಾಡಲಾಗಿತ್ತು. ಆಗ ದರ್ಶನ್ ಯಾವುದು ಬೇಡ ಎಂದು ಉತ್ತರ ನೀಡಿದ್ದಾರೆ.

ಹೀಗೆ ಚಂದನ್ ಕುಮಾರ್ ಅವರ ನೇತೃತ್ವದಲ್ಲಿ ಕೆಲವು ಸಾಕ್ಷಿ ಹಾಗೂ ವಿಚಾರಣೆಗಳನ್ನು ಮಾಡಿದ ನಂತರ ದರ್ಶನ್ ಅವರನ್ನು ಮತ್ತೆ ಜೂಲೈ 4ರ ವರೆಗೂ ಪರಪ್ಪನ ಅಗ್ರಹಾರದಲ್ಲಿ ಇರುವಂತೆ ನ್ಯಾಯಾಧೀಶರು ಆದೇಶ ಹೊರಡಿಸಿದರು. ಪರಪ್ಪನ ಅಗ್ರಹಾರದತ್ತಾ ಹೋರಟ ದರ್ಶನ್ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೂ ದರ್ಶನ್ ಅವರು ಸತತ 12ದಿನಗಳಿಂದ ಪೊಲೀಸ್ ಕಸ್ಟಡಿ ಅಲ್ಲಿಯೇ ಇದ್ದು ಈ ವರೆಗೂ ಯಾವ ಪ್ರತಿಕ್ರಿಯೆ ಅಥವಾ ರಿಯಾಕ್ಷನ್ ನೀಡಿರಲಿಲ್ಲ. ಆದರೆ ಪರಪ್ಪನ ಅಗ್ರಹಾರ ಜೈಲಿಗೆ ಹೊರಡುವ ವೇಳೆ ಪೊಲೀಸ್ ವಾಹನ ದಿಂದಲೇ ತನ್ನನ್ನು ನೋಡಲು ಬಂದಿದ್ದ ಅಭಿಮಾನಿಗಳಿಗೆ ಕೈ ಮುಗಿದು ಎಂದಿನಂತೆ ಪ್ಲೈನ್ ಕಿಸ್ ನೀಡಿದ್ದರು. ಇದನ್ನು ಕಂಡ ಅಭಿಮಾನಿಗಳು ಸಂತಸ ವ್ಯಕ್ತ ಪಡಿಸುತ್ತಾ ನಿಮ್ಮ ಜೊತೆ ನಾವು ಸದಾ ಇರುತ್ತೇವೆ ಖಂಡಿತ ನೀವು ಹೊರಗಡೆ ಬರುತ್ತೀರಾ ಎಂದು ಜೋರಾಗಿ ಕೋಗಿ ಹೇಳುತ್ತಿದ್ದರು.