ಈ ವರ್ಷದ ಮಳೆ ಕುರಿತು ಮತ್ತೊಂದು ಅಚ್ಚರಿ ಭವಿಷ್ಯ ನುಡಿದ ಕೋಡಿ ಮಠದ ಶ್ರೀಗಳು.. ;ಇಲ್ನೋಡಿ ವಿಡಿಯೋ

ಈ ವರ್ಷದ ಮಳೆ ಕುರಿತು ಮತ್ತೊಂದು ಅಚ್ಚರಿ ಭವಿಷ್ಯ ನುಡಿದ ಕೋಡಿ ಮಠದ ಶ್ರೀಗಳು.. ;ಇಲ್ನೋಡಿ ವಿಡಿಯೋ

ಕರ್ನಾಟಕದಲ್ಲಿ ಇದೀಗ ರಾಜ್ಯದಲ್ಲಿ ಮತ್ತೆ ಸಂಕಷ್ಟ ರೈತರಿಗೆ ಎದುರಾಗಿದೆ. ಕೆಲವು ದಿನಗಳ ಹಿಂದೆ ವಿಪರೀತ ಮಳೆ ಆಗಿದ್ದು ಯಾಕೆ ಇಷ್ಟು ಮಳೆ ಬರುತ್ತಿದೆ, ಸ್ವಲ್ಪ ಗ್ಯಾಪ್ ನೀಡಿದರೆ ನಾವು ನಮ್ಮ ಬೆಳೆಗಳನ್ನ ಹುಲ್ಲು ಕಳೆಗಳನ್ನ ಕಿತ್ತುಕೊಳ್ಳುತ್ತೇವೆ, ಹೆಚ್ಚು ಮಳೆ ಆಗುತ್ತಿದೆ ದೇವರೇ ಬೇರೆ ಕಡೆ ನಿನ್ನ ಮಾರ್ಗವನ್ನ ಬದಲಾಯಿಸು ಎಂಬುದಾಗಿ ಬೇಡಿಕೊಳ್ಳುವಂತೆ ಹೆಚ್ಚು ಮಳೆಯಾಗಿತ್ತು. ಆದರೆ ಇದೀಗ ದಿನಗಳು ಕಳೆದಂತೆ ಮಳೆ ಸದ್ದಿಲ್ಲದೆ ಕೆಲವು ಜಿಲ್ಲೆಗಳಲ್ಲಿ ಬಿತ್ತಿದ ಬೆಳೆ ಒಣಗಿ ಹೋಗುತ್ತಿವೆ.

ಮೆಕ್ಕೆಜೋಳ, ಹಾಗೂ ಬೇರೆ ಬೇರೆ ಕಡೆ ಸಾಕಷ್ಟು ರೈತರು  ಬೇರೆ ಬೇರೆ ಬೆಳೆಗಳನ್ನ ಬೆಳೆಯುತ್ತಿದ್ದಾರೆ. ಹೀಗಿರುವಾಗ ಒಳ್ಳೆ ಸಂದರ್ಭದಲ್ಲಿ ಮಳೆ ಕೈಕೊಟ್ಟಿದೆ ಎಂದು ರೈತರು ಹೇಳುತ್ತಿದ್ದು, ಕೆಲವರು ಹೀಗೆ ಆದರೆ ನಾವು ಜೀವನವ ಹೇಗೆ ಮಾಡಬೇಕು ಎಂಬಂತೆ ದೇವರ ಬಳಿ ಮೊರೆ ಹೋಗುತ್ತಿದ್ದಾರೆ.. ಹೌದು, ರಾಜ್ಯದಲ್ಲಿ ಇದೀಗ ಕೆಲವು ಕಡೆ ಬರ ಬಿದ್ದಿದೆ ಎಂದು ಹೇಳಬಹುದು. ಮಳೆಯೂ ಕಡಿಮೆಯಾಗಿದೆ. ರಾಜ್ಯದಲ್ಲಿ  ಮಳೆ ಹೆಚ್ಚಾಗಿ ಬರುತ್ತಿಲ್ಲ, ಕೆಲವು ಜಿಲ್ಲೆಗಳಂತೂ ಮಳೆ ಯಾವಾಗ ಮತ್ತೆ ಬರುತ್ತದೆ ದೇವರೇ ಎಂಬಂತೆ ಪ್ರತಿದಿನ ಬಿಸಿಲು ನೋಡಿ ನೋಡಿ ತಾವು ಹಾಕಿರುವ ಬೆಳೆಗಳನ್ನು ನೋಡಿ ಸಂಕಷ್ಟಕ್ಕೆ ಸಿಲುಕುತಿದ್ದಾರೆ.  

ಇದೀಗ ಕೊಡಿ ಮಠದ ಶ್ರೀಗಳು ಈ ವರ್ಷದ ಮಳೆಯ ಬಗ್ಗೆ ಮತ್ತೊಂದು ಭವಿಷ್ಯ ನೀಡಿದ್ದಾರೆ. ಹೌದು ರೈತರು ಚಿಂತೆ ಮಾಡಬೇಕಿಲ್ಲ, ಇಷ್ಟರಲ್ಲಿಯೇ ಮೊನ್ನೆ ಆಯಿತು ಅಲ್ವ ಅದೇ ರೀತಿ ದೊಡ್ಡ ಮಳೆ ಬರುವ ಸಾಧ್ಯತೆಗಳು ಇವೆ. ಕಾಲ ಯಾವಾಗ ಎಂಬುದನ್ನು ಹೇಳುತ್ತೇನೆ..ಅದು ಇಷ್ಟರಲ್ಲಿ ಎಂದು ಹೇಳಿದರು..ಕೋಡಿಮಠದ ಶ್ರೀಗಳಿಗೆ ಮಳೆ ಬಗ್ಗೆ ಪ್ರಶ್ನೆ ಮಾಡಿದಾಗ ಯಾವುದೇ ಸಮಸ್ಯೆ ಇಲ್ಲ, ಮಳೆ ಬರುತ್ತದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ರೈತರು ಇವರ ಮಾತನ್ನು ಕೇಳಿ ಆದಷ್ಟು ಬೇಗನೆ ಮಳೆ ಬರಲಿ ಎಂದು ಕೆಲವರು ಹೇಳುತ್ತಿದ್ದು, ಇಲ್ಲಿದೆ ನೋಡಿ ಆ ಕೊಡಿ ಮಠದ ಶ್ರೀಗಳ ವಿಡಿಯೋ. ರಾಜಕೀಯ ಬಗ್ಗೆಯೂ ಸಹ ಹೇಳಿದರು. ಈ ವರ್ಷದ ಮಳೆಗಾಗಿ ಹೆಚ್ಚು ನೀವು ಸಹ ಕಾಯುತ್ತಿದ್ದರೆ ಕೂಡಿ ಶ್ರೀ ಮಠದ ಈ ಭವಿಷ್ಯದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಧನ್ಯವಾದಗಳು.. ( video credit : tv 9 kannada )