ಈ ಒಂದು ಹರಕೆ ತಿಮ್ಮಪ್ಪನಿಗೆ ಸಲ್ಲಿಸಿದರೆ ಸಾಕ್ಷಾತ್ ತಿಮ್ಮಪ್ಪನೇ ನಿಮ್ಮ ಕನಸಿಗೆ ಬರುತ್ತಾನಂತೆ..!

ಈ ಒಂದು ಹರಕೆ ತಿಮ್ಮಪ್ಪನಿಗೆ ಸಲ್ಲಿಸಿದರೆ ಸಾಕ್ಷಾತ್ ತಿಮ್ಮಪ್ಪನೇ ನಿಮ್ಮ ಕನಸಿಗೆ ಬರುತ್ತಾನಂತೆ..!

ತಿರುಪತಿ ತಿಮ್ಮಪ್ಪ ದೇವರ ಮಹಿಮೆ ನಿಮಗೆ ಈಗಾಗಲೇ ಹೆಚ್ಚು ಗೊತ್ತಿದೆ ಅಂದುಕೊಂಡಿದ್ದೇವೆ. ಹೌದು ತಿರುಪತಿ ತಿಮ್ಮಪ್ಪನನ್ನು ಒಲಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಈ ದೇವರಿಂದ ಕೋಟ್ಯಂತರ ಭಕ್ತಾದಿಗಳು ಅವರ ಕಷ್ಟಗಳನ್ನು ಹೇಳಿಕೊಂಡು ನಿಸ್ವಾರ್ಥ ಸೇವೆ ಸಲ್ಲಿಸುತ್ತಾ ಪೂಜೆ ಮಾಡುತ್ತಾ ತಮ್ಮ ಕಷ್ಟಗಳನ್ನು ದೂರ ಮಾಡಿಕೊಳ್ಳುತ್ತಾರೆ. ಹೌದು ಈ ದೇವರು ಅಷ್ಟು ಸುಲಭವಾಗಿ ಯಾರಿಗೂ ಒಲಿಯುವುದಿಲ್ಲ ಎಂದು ಮೊದಲೇ ಹೇಳಿದಂತೆ ಎಲ್ಲರಿಗೂ ಕೂಡ ತಿರುಪತಿ ದೇವರ ಶಕ್ತಿ ಏನು ಎಂಬುದು ಗೊತ್ತು. ನೀವು ಕೂಡ ನಿಮ್ಮ ಜೀವನದಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದೀರಿ, ಮತ್ತು ಆರ್ಥಿಕವಾಗಿ ಕಷ್ಟಗಳನ್ನು ಎದುರಿಸುತ್ತಿದ್ದೀರಿ, ಕೈಗೊಂಡ ಕೆಲಸಗಳು ಯಾವುವು ಆಗುತ್ತಿಲ್ಲ ಎಂದೆನಿಸಿ ಈ ಜೀವನವೇ ಬೇಡ ಎನ್ನುವಂತೆ ಕುಗ್ಗಿ ಹೋಗಿದ್ದರೆ ತಿರುಪತಿ ತಿಮ್ಮಪ್ಪನ ಬಳಿ ಇದೊಂದು ದಾರಿ ಇದೆ.

ಹೌದು ನೀವು ತಿರುಪತಿ ತಿಮ್ಮಪ್ಪನ ಬಳಿ ಈ ಹರಕೆ ಕಟ್ಟಿಕೊಂಡರೆ ನಿಜಕ್ಕೂ ನಿಮ್ಮ ಕೆಲಸ ಆಗುತ್ತದಂತೆ. ಜೊತೆಗೆ ತಿರುಪತಿ ತಿಮ್ಮಪ್ಪನೇ ನಿಮ್ಮ ಕನಸಿನಲ್ಲಿ ಬಂದು ನಿಮ್ಮ ಕಷ್ಟಗಳನ್ನು ಆಲಿಸಿ ನಂತರ ಅವುಗಳಿಗೆ ಮುಕ್ತಿ ಕೊಡುತ್ತಾನೆ. ನೀವು ಕೈಗೊಂಡ ಕೆಲಸಗಳು ಆಗುತ್ತವೆ ಎಂಬುದಾಗಿ ಹೇಳಲಾಗುತ್ತಿದೆ...ತಿರುಪತಿ ದೇವರಿಗೆ ಮುಡುಪು ಕಟ್ಟಬೇಕು, ಒಂದು ಬಿಳಿ ಬಟ್ಟೆಯಲ್ಲಿ ಅರಿಶಿಣ ಜೊತೆಗೆ ಮೂರು ರೂಪಾಯಿ ನಾಣ್ಯವನ್ನು ಇಟ್ಟು ನೀವು ನಿಮ್ಮ ಮನಸ್ಸಿನಲ್ಲಿಯೆ ನಿಮ್ಮ ಕೆಲಸಗಳ ಬಗ್ಗೆ ಸಂಕಲ್ಪ ಮಾಡಿಕೊಳ್ಳಬೇಕು. ನಿಮ್ಮ ಕೆಲಸ ಏನು ಮತ್ತು ನಿಮ್ಮ ಬೇಡಿಕೆ ಏನು ಎಂಬುದಾಗಿ ಆಗ ಹರಕೆ ಮೂಲಕ ಕೇಳಿಕೊಳ್ಳಬೇಕು.   

ನಂತರ ಆ ಬಟ್ಟೆಗೆ ಎರಡು ಗಂಟು ಹಾಕಿ ಒಂದು ಲೋಟದ ಕೆಳಗಡೆ ಅದನ್ನ ಮುಚ್ಚಿಡಬೇಕು. ಹಾಗೆ ನೀವು ಮನಸ್ಸಿನಲ್ಲಿ ಮಾಡಿಕೊಂಡ ನಿಮ್ಮ ಸಂಕಲ್ಪ ನೆರವೇರುವವರೆಗೂ ಆ ಲೋಟವನ್ನು ತೆರೆಯಬಾರದು. ಸಂಕಲ್ಪ ನೇರವೇರಿದ ಬಳಿಕ ಅದನ್ನು ತೆಗೆದುಕೊಂಡು ಆ ಮುಡುಪನ್ನು ನೀವೇ ಹೋಗಿ ತಿರುಪತಿ ತಿಮ್ಮಪ್ಪನ ಆಸ್ಥಾನಕ್ಕೆ ಸಲ್ಲಿಸಬೇಕು.. ನಂತರ ಅಲ್ಲಿಂದ ಬಂದು ಅದೇ ಬಟ್ಟೆಯನ್ನು ತಟ್ಟೆಯಲ್ಲಿ ಇಟ್ಟು ಹಾಲು ಹಾಕಿ ನಂತರ ತುಳಸಿ ಗಿಡಕ್ಕೆ ಪೂಜೆ ಸಲ್ಲಿಸಬೇಕು. ಆ ನೀರನ್ನು ಹೂವಿಗೆ ಅರ್ಪಿಸಬೇಕು. ಆಗ ಸಾಕ್ಷಾತ್ ತಿರುಪತಿ ತಿಮ್ಮಪ್ಪ ವೆಂಕಟೇಶನೇ ನಿಮ್ಮ ಕನಸಿನಲ್ಲಿ ಬರುತ್ತಾನೆ. ನಿಮ್ಮ ಕಷ್ಟಗಳನ್ನು ಆಲಿಸಿ ಅವುಗಳಿಂದ ನಿಮಗೆ ಮುಕ್ತಿ ನೀಡುತ್ತಾನೆ, ನೀವು ಅಂದುಕೊಂಡಂತೆ ನಿಮ್ಮ ಕೆಲಸ ಆಗುತ್ತದೆ ಎಂದು ಹೇಳಲಾಗುತ್ತಿದೆ.. ಇಲ್ಲಿದೆ ನೋಡಿ ಆ ವಿಡಿಯೋ.. ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಒಮ್ಮೆ ನೋಡಿ, ಮತ್ತು ಈ ಮಾಹಿತಿ ನಿಮಗೆ ಉಪಯುಕ್ತ ಇದೆ ಎಂದೆನಿಸಿದಲ್ಲಿ ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು.. (video credit : degula darshana karnataka ).