ಭಾರತದ ಈ ಹಳ್ಳಿಯಲ್ಲಿ ಮಕ್ಕಳಾದ ಮೇಲೆ ಮದ್ವೆಯಂತೆ ಇದೇನಿದು ವಿಚಿತ್ರ : ಎಲ್ಲಿ ನೋಡಿ ?

ಭಾರತದ ಈ ಹಳ್ಳಿಯಲ್ಲಿ ಮಕ್ಕಳಾದ ಮೇಲೆ ಮದ್ವೆಯಂತೆ ಇದೇನಿದು ವಿಚಿತ್ರ : ಎಲ್ಲಿ ನೋಡಿ ?

ಸಾಮಾನ್ಯವಾಗಿ ಹಿಂದೂ ಸಮಾಜದಲ್ಲಿ ಗಂಡು ಮತ್ತು ಹೆಣ್ಣಿಗೆ ಮೊದಲು ಮದುವೆ ಮಾಡಿಸುತ್ತಾರೆ . ನಂತರ ಮದುವೆ ಅದ ಮೇಲೆ ಅವರಿಗೆ ಮಕ್ಕಳು ಆಗುತ್ತೆ . ಆದರೆ ಭಾರತದ ಕೆಲವು ಹಳ್ಳಿಗಳಲ್ಲಿ ವಿಚಿತ್ರವಾದ ಸಂಪ್ರದಾಯ ಇರುತ್ತೆ . ಅಂತಹದೇ ಒಂದು ಹಳ್ಳಿ ರಾಜಸ್ತಾನದಲ್ಲಿ  ಇದೆ .ಅದರ ಸಂಪ್ರದಾಯ ಏನೆಂದು ನೋಡಣ ಬನ್ನಿ   ಭಾರತದಂತಹ ವಿವಿಧ ಸಂಸ್ಕೃತಿಗಳ ದೇಶದಲ್ಲಿ  ಯುವಜನತೆ ವೈವಾಹಿಕ ಸಂಬಂಧಕ್ಕೆ ಧುಮುಕುವ ಮುನ್ನ ತಮ್ಮ ಜೋಡಿ ಮುಂದಿನ ದಿನಗಳಲ್ಲಿ ಸಮರ್ಪಕವಾಗಬಹುದೆ ಎಂದು ಪ್ರಮಾಣಿಸಿ ನೋಡಿದ ಬಳಿಕವೇ ಮುಂದಡಿ ಇಡುವ ಪರಿಯನ್ನು ನಿಧಾನವಾಗಿ ಅನೆಯಿಸಿಕೊಳ್ಳುತ್ತಿದೆ.

ಆದರೆ ರಾಜಸ್ಥಾನದ ಗರಾಸಿಯ ಜನಾಂಗದವರಲ್ಲಿ ಬಹಳ ಹಿಂದಿನಿಂದಲೂ ಈ ಪದ್ಧತಿ ನಡೆದು ಬಂದಿದೆ. ತಮ್ಮ ವಿಶಿಷ್ಟ ಸಂಪ್ರದಾಯಗಳಿಂದ ಭಾರತದ ಸಂಸ್ಕೃತಿಯಲ್ಲಿ ವೈವಿಧ್ಯ ಸ್ಥಾನ ಪಡೆದಿದೆ ರಾಜಸ್ಥಾನದಲ್ಲಿನ ಗರಾಸಿಯಾ ಎಂಬ ಜನಾಂಗ. ಈ ಜನಾಂಗದವರ ವಿಶೇಷ ಏನೆಂದರೆ ಪುರುಷರು ತಮಗಿಷ್ಟ ಬಂದ ಹುಡುಗಿಯ ಜೊತೆ ಲಿವಿಂಗ್ ರಿಲೇಶನಶಿಪ್ ನಲ್ಲಿ ಇರುವುದಕ್ಕೆ ಯಾರದೇ ಅಭ್ಯಂತರವಿಲ್ಲ ಮಕ್ಕಳನ್ನು ಪಡೆಯಬಹುದಂತೆ ಇಲ್ಲಿ ಹುಡುಗ ಹುಡುಗಿ ಮದುವೆ ಆಗದಿದ್ದರೂ ಸಂಸಾರ ನಡೆಸಬಹುದಂತೆ ಮದುವೆ ಒಂದು ಆಗಿಲ್ಲ ಅನ್ನುವುದು ಬಿಟ್ಟರೆ ಉಳಿದದ್ದೆಲ್ಲಾ ಗಂಡ ಹೆಂಡತಿ ಅಂತೆ ಇರಬಹುದಂತೆ. ಇದಕ್ಕೆ ಹಿರಿಯರ ಸಮ್ಮತಿಯೂ ಇಲ್ಲಿ ಇದೆಯಂತೆ ಈ ಸಂದರ್ಭದಲ್ಲಿ ಮಕ್ಕಳನ್ನು ಪಡೆಯುವ ಸ್ವಾತಂತ್ರ ಅವರಿಗೆ ಇದೆಯಂತೆ ಮದುವೆಯನ್ನು ಆಮೇಲೆ ಮಾಡಿಕೊಳ್ಳಬಹುದಂತ

. ಗರಾಸಿಯಾ ಜನಾಂಗದವರಲ್ಲಿ ಮೂರು ಪ್ರಕಾರದ ವಿವಾಹ ಚಾಲ್ತಿಯಲ್ಲಿದೆ. ಮೌರ್ ಬಾದಿಯಾ ಈ ವಿವಾಹ ಪದ್ಧತಿಯಲ್ಲಿ ಸಪ್ತ ಪದ್ಧತಿ ಇರುತ್ತದೆ. ಪಹಾರಾವನ ವಿವಾಹ ಈ ಪದ್ಧತಿಯಲ್ಲಿ ನಾಮ ಮಾತ್ರಕ್ಕಷ್ಟೆ ವಿಧಿ ವಿಧಾನಗಳು ನಡೆಯುತ್ತವೆ.ಇನ್ನು ತಣಾನ ವಿವಾಹ ಈ ಪದ್ಧತಿಯಲ್ಲಿ ವರನ ಕಡೆಯವರು ವಧುವಿನ ಕಡೆಯವರಿಗೆ ಕೇವಲ ಕನ್ಯೆಯ ಮೌಲ್ಯದ ರೂಪದಲ್ಲಿ ಉಡುಗೊರೆಯಾಗಿ ನೀಡುತ್ತಾರೆ


ಇಲ್ಲಿ ಯಾವುದೇ ವ್ಯಕ್ತಿ ವಿವಾಹವಾಗಬೇಕಾದರೆ ಆ ವ್ಯಕ್ತಿ ಕುಟುಂಬ ನಿರ್ವಹಣೆಗೆ ಸಾಕಷ್ಟು ಆದಾಯ ಜಮಾ ಮಾಡಬೇಕಂತೆ. ಆ ನಂತರವೇ ಮದುವೆಯಾಗಬೇಕಂತೆ ಇಲ್ಲಿ ತಮಗಿಷ್ಟವಾದ ವಧುವನ್ನು ವರ ಆಯ್ಕೆ ಮಾಡಲು ಸಮ್ಮೇಳನಗಳನ್ನು ನಡೆಸುತ್ತಾರೆ ಆ ಮೇಳದಲ್ಲಿ ಕುಟುಂಬದವರು ತಮ್ಮ ಹೆಣ್ಣು ಮಕ್ಕಳನ್ನು ಮೇಳದಲ್ಲಿ ಬಿಟ್ಟು ಹೋಗುತ್ತಾರೆ ಪುರುಷರು ತಮಗಿಷ್ಟವಾದ ಹೆಣ್ಣುಮಕ್ಕಳನ್ನು ಆಯ್ಕೆ ಮಾಡಿ ಅವರೊಂದಿಗೆ ಮನೆಗೆ ತೆರಳುತ್ತಾರೆ ಎರಡು ದಿನಗಳ ಕಾಲ ಈ ಮೇಳ ನಡೆಯುತ್ತದೆ. ರಾಜಸ್ಥಾನ ಮತ್ತು ಗುಜರಾತಿನ ಕೆಲವು ಸ್ಥಳಗಳಲ್ಲಿ ಈ ಮೇಳ ನಡೆಯುತ್ತದೆ.

ಪ್ರಪಂಚದಲ್ಲಿ ಇನ್ನು ವಿಚಿತ್ರವಾದಂತಹ ಹಳ್ಳಿಗಳಿವೆ ವಿಚಿತ್ರ ಆಚಾರಗಳಿವೆ ಭಾರತೀಯ ಸಂಸ್ಕೃತಿಯಲ್ಲಿ ಈ ಗರಾಸಿಯ ಜನಾಂಗದವರು ತಮ್ಮ ವಿಶಿಷ್ಟ ಸಂಪ್ರದಾಯಗಳಿಂದ ಇತರ ಜನಾಂಗಗಳಿಗಿಂತ ತುಂಬಾ ವಿಭಿನ್ನ ಎನಿಸಿಕೊಂಡಿದ್ದಾರೆ ಅವರ ಆಚಾರ ವಿಚಾರ ಜೀವನ ಪದ್ದತಿ ಎಲ್ಲವೂ ಬೇರೆ ರೀತಿಯದ್ದಾಗಿದೆ ತಮ್ಮ ವಿಶಿಷ್ಟ ಸಂಪ್ರದಾಯಗಳಿಂದಲೆ ಇವರು ತಮ್ಮನ್ನು ಗುರುತಿಸಿಕೊಂಡಿದ್ದಾರೆ.