ಸ್ಪಂದನಾ ಇಲ್ಲದೆ ನಾನು ಬದುಕುವುದಿಲ್ಲ..! ಅಮ್ಮನ ಬಳಿ ಕಣ್ಣೀರಿಟ್ಟ ವಿಜಯ್ ರಾಘವೇಂದ್ರ !!

ಸ್ಪಂದನಾ ಇಲ್ಲದೆ ನಾನು ಬದುಕುವುದಿಲ್ಲ..! ಅಮ್ಮನ ಬಳಿ ಕಣ್ಣೀರಿಟ್ಟ ವಿಜಯ್ ರಾಘವೇಂದ್ರ !!

ಜೀವನ ಅಂದರೆ ಹಾಗೇನೆ ಯಾವಾಗ ಯಾರ ಜೀವನದಲ್ಲಿ ಅದೆಷ್ಟು ದಿನ ಸಂಭ್ರಮ ಇರುತ್ತೋ ಗೊತ್ತಿಲ್ಲ. ಅದೆಷ್ಟು ಸಂಭ್ರಮದ ನಡುವೆ ಭರಸಿಡಿಲು ಬಂದಂತೆ ಕಷ್ಟಗಳು ಎದುರು ಬರುತ್ತವೆಯೋ ಅದು ಕೂಡ ಗೊತ್ತಿಲ್ಲ. ಆ ದೇವರೇ ಅದನ್ನೆಲ್ಲ ಬಲ್ಲ. ಹೌದು ಯಾವುದೇ ಕುಂದು ಕೊರತೆಯಿಲ್ಲದೆ ಬರೀ ಪ್ರೀತಿ ಪ್ರೇಮ ಎಂದು ತುಂಬಾ ನಗುನಗುತ್ತಾ ಜೀವನವನ್ನ ಸಾಗಿಸುತ್ತಿದ್ದ ನಟ ವಿಜಯ್ ರಾಘವೇಂದ್ರ ಅವರ ಬದುಕಿನಲ್ಲಿ ಇದೀಗ ದೊಡ್ಡ ಬಿರುಗಾಳಿಯೆ ಎದ್ದಿದೆ.

ಅವರು ಅವರ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಅವರ ಪ್ರೀತಿಯ ಮಡದಿ ಸ್ಪಂದನಾ ಅವರನ್ನ ದೇವರು ದೂರ ಮಾಡಿ ಕರೆದುಕೊಂಡು ಹೋಗಿದ್ದಾನೆ. ಸ್ಪಂದನ ಅವರು ಹೃದಯಘಾತಕ್ಕೆ ಒಳಗಾಗಿ ನಿಧನ ಆಗಿದ್ದಾರೆ. ಇಂದು ಬೆಂಗಳೂರಿಗೆ ಸ್ಪಂದನ ಅವರ ಮೃತದೇಹ ಆಗಮಿಸಲಿದ್ದು ಮೊನ್ನೆ ಬ್ಯಾಂಕಾಕ್ ನಲ್ಲಿಯೇ ಸಾವನಪ್ಪಿದ್ದಾರೆ ಎನ್ನಲಾಗಿದೆ. ಹೌದು ರಾತ್ರಿ ಮಲಗಿದ ಸ್ಪಂದನಾ ಅವರು ಮತ್ತೆ ಮೆಲೇಳಲೆ ಇಲ್ಲ. ಇಂತಹ ಪರಿಸ್ಥಿತಿ ಯಾರಿಗೂ ಬಾರದಿರಲಿ. ಅದು ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಂತಹ ಸಾವು ಆಗುತ್ತದೆ ಎಂದರೆ ನಾವು ಹೇಗೆ ನಂಬುವುದು, ಈ ಜೀವನದಲ್ಲಿ ಯಾವುದು ನಿರೀಕ್ಷೆ ಇಲ್ಲದಂತಾಗಿದೆ. 

ಅವರ ಕುಟುಂಬ ಈ ಅಗಲಿಕೆಯ ವಿಚಾರವನ್ನ ಹೇಗೆ ತೆಗೆದುಕೊಳ್ಳುತ್ತಾರೋ ಏನೋ, ಹಾಗೆ ನಟ ವಿಜಯ್ ರಾಘವೇಂದ್ರ ಅವರು ಇದರಿಂದ ಹೇಗೆ ಹೊರ ಬರುತ್ತಾರೆಂದು ಸಾಕಷ್ಟು ಜನರು ಹೆಚ್ಚು ಚಿಂತನೆಯನ್ನ ನಡೆಸುತ್ತಿದ್ದಾರೆ. ಇದನ್ನ ನೆನೆದರೆ ಸಾಕು ಕಣ್ಣಂಚಲ್ಲೆ ನೀರು ಬರುತ್ತದೆ...ಅಷ್ಟು ಪ್ರೀತಿ ಮಾಡುತ್ತಿದ್ದ ನಟ ವಿಜಯ್ ರಾಘವೇಂದ್ರ ಅವರು ಅವರ ಪ್ರೀತಿಯ ಹೆಂಡತಿ ಸ್ಪಂದನ ಅವರನ್ನು ಈ ಸ್ಥಿತಿಯಲ್ಲಿ ಹೇಗೆ ನೋಡುತ್ತಾರೋ ದೇವರೇ ಬಲ್ಲ.. ಈ ನೋವನ್ನು ತಡೆದುಕೊಳ್ಳುವ ಶಕ್ತಿ ಆ ದೇವರು ಇವರಿಗೆ ನೀಡಲಿ. ದೇವರು ಈ ಪ್ರೀತಿಯ ಗಂಡ ಹೆಂಡತಿ ಒಟ್ಟಿಗೆ ಖುಷಿ ಖುಷಿಯಾಗಿ ಇದ್ದದ್ದನ್ನು ನೋಡಿ ಹೊಟ್ಟೆಕಿಚ್ಚು ಪಟ್ಟನೋ ಗೊತ್ತಿಲ್ಲ.   

ಬಹುಬೇಗನೆ ಸ್ಪಂದನ ಅವರನ್ನ ತನ್ನತ್ತ ಕರೆದುಕೊಂಡ. ಹೌದು ಸ್ಪಂದನ ಅವರು ವಿಧಿವಶರಾದ ಬಳಿಕ ವಿಜಯ ರಾಘವೇಂದ್ರ ಅವರು ಅವರ ತಾಯಿಗೆ ಫೋನ್ ಮಾಡಿದ್ದರಂತೆ. ಹೆಂಡತಿಯ ನೆನೆದು ಬಿಕ್ಕಿಬಿಕ್ಕಿ ಅಳುತ್ತಾ ಸ್ಪಂದನ ಇಲ್ಲದೆ ನಾನು ಬದುಕುವುದು ಇಲ್ಲ ಅಮ್ಮ ಎಂದು ಹೇಳಿ ಅಳುತ್ತಿದ್ದರಂತೆ. ಆ ವಿಚಾರವನ್ನು ಖ್ಯಾತ ನಟಿ ಜಯಮಾಲಾ ಅವರು ವಿಜಯ ರಾಘವೇಂದ್ರರ ಮನೆಗೆ ಭೇಟಿ ನೀಡಿ ವಿಜಯ್ ರಾಘವೇಂದ್ರ ಅವರ ತಾಯಿಯನ್ನು ಮಾತನಾಡಿಸಿಕೊಂಡು ಹೊರಬಂದ ಬಳಿಕ ಸಂದರ್ಶನದಲ್ಲಿ ಮಾಧ್ಯಮದ ಎದುರು ಈ ತಾಯಿ ಮಗನ ವಿಚಾರವನ್ನು ಬಿಚ್ಚಿಟ್ಟಿದ್ದಾರೆ ಎಂದು ಈ ವಿಡಿಯೋದಲ್ಲಿ ಹೇಳಿದ್ದಾರೆ.  

ಇನ್ನು ಏನೇನೆಲ್ಲಾ ಹೇಳಿದರು ಗೊತ್ತಾ..? ಇಲ್ಲಿದೆ ನೋಡಿ ವಿಡಿಯೋ. ವಿಧಿ ಮುಂದೆ ಎಲ್ಲರೂ ಕೂಡ ಶೂನ್ಯ. ವಿಧಿ ಸ್ಪಂದನ ಅವರನ್ನ ನಟ ವಿಜಯ್ ರಾಘವೇಂದ್ರ ಅವರ ಬಾಳಿನಲ್ಲಿ ಜೀವನದುದ್ದಕ್ಕು ನೋವಿನಲ್ಲಿಯೇ ಇರುವ ರೀತಿ ಅವರನ್ನು ಕರೆದುಕೊಂಡು ಹೋಗಿಬಿಟ್ಟ. ಸ್ಪಂದನಾ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಸ್ಪಂದನ ಅವರ ಅಗಲಿಕೆ ನೋವನ್ನು ಆ ಕುಟುಂಬ ಮತ್ತು ವಿಜಯ ರಾಘವೇಂದ್ರ ಅವರಿಗೆ ತಡೆದುಕೊಳ್ಳುವ ಶಕ್ತಿಯ ನೀಡಲಿ ಆ ದೇವರು ಎಂದು ಪ್ರಾರ್ಥಿಸೋಣ...

VIDEO CREDIT : DIGVIJAYA NEWS