ವಾರದ ಪಂಚಾಯಿತಿಯಲ್ಲಿ ಮಾನಸ ಮತ್ತು ಹಂಸಗೆ ಗ್ರಹಚಾರ ಬಿಡಿಸಿದ ಕಿಚ್ಚ: ಸ್ವರ್ದಿಗಳು ಗಪ್ ಚುಪ್ ?

ವಾರದ ಪಂಚಾಯಿತಿಯಲ್ಲಿ ಮಾನಸ  ಮತ್ತು ಹಂಸಗೆ ಗ್ರಹಚಾರ ಬಿಡಿಸಿದ ಕಿಚ್ಚ: ಸ್ವರ್ದಿಗಳು ಗಪ್ ಚುಪ್ ?

ಈಗ ಶನಿವಾರದ ಬಿಗ್ ಬಾಸ್ ಗೋಸ್ಕರ ಎಲ್ಲ ವೀಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ . ಏಕೆಂದ್ರೆ ಈಗ ಬಿಗ್ ಬಾಸ್ ಮನೆಯಿಂದ ಆಚೆ ಹೋಗಿರುವ ಜಗದೀಶ್ ಮತ್ತೆ ಮನೆಗೆ ಎಂಟ್ರಿ ಕೊಡುತ್ತಾರ ಎನ್ನುವುದು ಎಲ್ಲ ವೀಕ್ಷಕರ ಪ್ರಶ್ನೆಯಾಗಿದೆ . ಇದಕೊಸ್ಕರ ಈ ವಾರದ ಕಿಚ್ಚನ ಪಂಚಾಯತಿಗೆ ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ . ಇದಕೆಲ್ಲ ಉತ್ತರ ಇಲ್ಲಿದೆ ನೋಡಿ 

ಬಿಗ್ ಬಾಸ್ ಶೋನಲ್ಲಿ ಮಹಿಳಾ ಸ್ಪರ್ಧಿಗಳನ್ನು ನಿಂದಿಸಿದಕ್ಕಾಗಿ ಜಗದೀಶ್ ಅವರಿಗೆ ಕ್ಲಾಸ್ ತಗೆದು ಕೊಂಡ  ನಂತರ, ಈ ಶನಿವಾರದ ಶೋನಲ್ಲಿ ಕಿಚ್ಚ ಸುದೀಪ್ ಮಾನಸ  ಅವರಿಗೆ ಕ್ಲಾಸ್ ತಗೆದು ಕೊಂಡರು ಮಾನಸ  ಅವರು ಜಗದೀಶ್ ಅವರಿಗೆ ಸೀರೆ ಧರಿಸಲು ಹೇಳಿದ ಕಾರಣಕ್ಕೆ, "ನೀವು ಪುರುಷರಿಗೂ ಗೌರವ ನೀಡಬೇಕು. ಸೀರೆ ಧರಿಸುವುದು ಮಹಿಳೆಯ ಹಕ್ಕು ಮತ್ತು ಅದಕ್ಕೆ ಮಹತ್ವವಿದೆ" ಎಂದು ಹೇಳಿದರು.

ಹಂಸಾ ಅವರು ಜಗದೀಶ್ ಸೀರೆ ಧರಿಸಲು ಯೋಗ್ಯರಲ್ಲ ಎಂದು ಹೇಳಿದ ಕಾರಣಕ್ಕೂ ಕಿಚ್ಚ ಸುದೀಪ್ ಅವರಿಗೆ ಕ್ಲಾಸ್ ತಗೆದು ಕೊಂಡರು. "ಬಿಗ್ ಬಾಸ್ ಶೋವನ್ನು ಸಾವಿರಾರು ಜನರು ನೋಡುತ್ತಾರೆ. ನೀವು ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು ಮತ್ತು ನಿಮ್ಮ ಮಾತುಗಳಲ್ಲಿ ನೈತಿಕತೆ ಇರಬೇಕು" ಎಂದು ಹೇಳಿದರು.

ಮಾನಸ  ಅವರು ಪುರುಷ ಸ್ಪರ್ಧಿಗಳ ಬಗ್ಗೆ ಕೆಟ್ಟ ಪದಗಳನ್ನು ಬಳಸಿದಕ್ಕಾಗಿ ಪ್ರೇಕ್ಷಕರು ತೀವ್ರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಈ ಘಟನೆ ಮನೆಯಲ್ಲಿ ಮತ್ತು ಹೊರಗಿನ ಪ್ರೇಕ್ಷಕರಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಬಿಗ್ ಬಾಸ್ ಶೋನಲ್ಲಿ ಈ ರೀತಿಯ ಘಟನೆಗಳು ಮುಂದಿನ ಎಪಿಸೋಡ್ಗಳಲ್ಲಿ ಹೇಗೆ ಮುಂದುವರಿಯುತ್ತವೆ ಎಂಬುದನ್ನು ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ.

ಕಿಚ್ಚ ಸುದೀಪ್ ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಗಳ ಮೇಲೆ ಯಾವುದೇ ಪಕ್ಷಪಾತ ತೋರಿಸುತ್ತಿಲ್ಲ. ಪುರುಷ ಅಥವಾ ಮಹಿಳಾ ಸ್ಪರ್ಧಿಗಳಾಗಲಿ, ಯಾರೇ ಬಿಗ್ ಬಾಸ್ ಶೋನ ನಿಯಮಗಳನ್ನು ಉಲ್ಲಂಘಿಸಿದರೂ, ಸುದೀಪ್ ಅವರು ಅವರನ್ನು ತೀವ್ರವಾಗಿ ತಿರಸ್ಕರಿಸುತ್ತಾರೆ. ಈ ನಿಷ್ಪಕ್ಷಪಾತ ಧೋರಣೆ ಮತ್ತು ನ್ಯಾಯಸಮ್ಮತ ವರ್ತನೆಯಿಂದ, ಪ್ರತಿ ಪ್ರೇಕ್ಷಕರಿಗೂ ಸುದೀಪ್ ಅವರ ಈ ಗುಣವು ಇಷ್ಟವಾಗಿದೆ.