ಕನ್ನಡ ಚಲನಚಿತ್ರ ರಂಗದ ಹಿರಿಯ ನಿರ್ದೇಶಕ ನಿಧನ ಕಣ್ಣೀರಿಟ್ಟ ಚಿತ್ರ ರಂಗ !!

ಕನ್ನಡ ಚಿತ್ರರಂಗರಲ್ಲಿ ಯಶಸ್ವಿ ನಿರ್ದೇಶಕ ಎನಿಸಿಕೊಂಡಿದ್ದ ಉಮೇಶ್ ಅವರು, ‘ಅವನೇ ನನ್ನ ಗಂಡ’, ‘ನನಗೂ ಹೆಂಡತಿ ಬೇಕು’, ‘ತುಂಬಿದ ಮನೆ’, ‘ರಾಜ ಕೆಂಪು ರೊಜ’, ‘ಅವಳೆ ನನ್ನ ಹೆಂಡ್ತಿ’, ಎಲ್ಲರಂಥಲ್ಲ ನನ್ನ ಗಂಡ ಇನ್ನೂ ಕೆಲವು ಸಿನಿಮಾಗಳನ್ನ ನಿರ್ದೇಶಿಸಿದ್ದ ಸೈ ಎನಿಸಿಕೊಂಡಿದ್ದರು.
ಕಳೆದ ಕೆಲವು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಉಮೇಶ್ ಚಿಕಿತ್ಸೆ ಫಲಕಾರಿಯಾಗದೇ ಇಂದು (ಫೆ.21) ನಿಧನ ಹೊಂದಿದ್ದಾರೆ. ಅವರ ಅಂತ್ಯಕ್ರಿಯೆ ಇಂದು ಬನಶಂಕರಿಯ ಚಿತಾಗಾರದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕಾಶಿನಾಥ್ ನಟನೆಯ ಅವಳೇ ನನ್ನ ಹೆಂಡತಿ, ಅವನೇ ನನ್ನ ಗಂಡ, ರಾಜ ಕೆಂಪು ರೊಜ, ನನಗೂ ಹೆಂಡತಿ ಬೇಕು, ತುಂಬಿದ ಮನೆ ಸೇರಿದಂತೆ ಇನ್ನೂ ಅನೇಕ ಸಿನಿಮಾಗಳನ್ನು ನಿರ್ದೇಶಿಸಿದ್ದ ಎಸ್. ಉಮೇಶ್ ಅವರಿಗೆ ಏಕಾಏಕಿ ಆರೋಗ್ಯದ ಸಮಸ್ಯೆ ಕಾಡಿತ್ತು. ಕಳೆದ ಕೆಲ ವರ್ಷಗಳ ಹಿಂದೆ ಅವರಿಗೆ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಂಡಿತ್ತು.
ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಎಸ್. ಉಮೇಶ್ ಆರ್ಥಿಕ ಸಮಸ್ಯೆಗೆ ಕೂಡ ಒಳಗಾಗಿ ನೆರವಾಗಿ ಎಲ್ಲರ ಬಳಿ ಮನವಿ ಮಾಡಿದ್ದರು. 'ನನ್ನ ಪರಿಸ್ಥಿತಿ ತುಂಬಾ ಕಷ್ಟ ಆಗಿದೆ. ನನ್ನ ಎಡ ಭಾಗದ ಕಿಡ್ನಿ ಸಂಪೂರ್ಣ ವಿಫಲವಾಗಿದೆ. ಮಗ ಎಸ್ಎಸ್ಎಲ್ಸಿ ಓದುತ್ತಿದ್ದಾನೆ. ಅವನ ಶಾಲೆಯ ಫೀಸ್ ಕಟ್ಟಲು ಹಣವಿಲ್ಲ. ದಾನಿಗಳು ಯಾರಾದರೂ ನನಗೆ ಸಹಾಯ ಮಾಡಿ' ಎಂದು ವಿಡಿಯೋ ಮೂಲಕ ಮನವಿ ಮಾಡಿದ್ದರು. ಉಮೇಶ್ ಅವರ ವಿಡಿಯೋ ನೋಡಿದ ಲಹರಿ ಸಂಸ್ಥೆಯ ಮನೋಹರ್ ನಾಯ್ಡು ಹಾಗೂ ಲಹರಿ ವೇಣು ಹಣದ ಸಹಾಯ ಮಾಡಿದ್ದರು.