ಸ್ಮಶಾನದಲ್ಲಿ ಸುತ್ತಾಡಿದ ಬಿಗ್​ಬಾಸ್​ ಹಂಸಾ !! ಶಾಕಿಂಗ್ ಕಾರಣ ಏನು ನೋಡಿ ?

ಸ್ಮಶಾನದಲ್ಲಿ ಸುತ್ತಾಡಿದ ಬಿಗ್​ಬಾಸ್​ ಹಂಸಾ !! ಶಾಕಿಂಗ್  ಕಾರಣ ಏನು ನೋಡಿ ?

ಬಿಗ್‌ ಬಾಸ್‌ ಮನೆಯಲ್ಲಿ  4 ವಾರಗಳ ಕಾಲ ಇದ್ದು ಎಲಿಮಿನೇಟ್​ ಆಗಿ ಹೊರಬಂದವರು ಹಂಸಾ ನಾರಾಯಣಸ್ವಾಮಿ ಉರ್ಫ್​ ಹಂಸಾ ಪ್ರತಾಪ್​. ಬಿಗ್​ಬಾಸ್​ ಮನೆಯಲ್ಲಿ ಇರುವಷ್ಟು ದಿನ ಹವಾ ಕ್ರಿಯೇಟ್​ ಮಾಡಿದ್ದರು. ಇವರು ಸಕತ್​ ಸದ್ದು ಮಾಡಿದ್ದು, ಲಾಯರ್​ ಜಗದೀಶ್​ ಅವರೊಂದಿಗಿನ ಒಡನಾಟದಿಂದಾಗಿ. ಕೊನೆಗೆ ಇಬ್ಬರೂ ಹೊರಕ್ಕೆ ಬಂದರು. ಇದು ಬಿಗ್​ಬಾಸ್​ ಹಂಸಾರ ಕಥೆಯಾದ್ರೆ, ಪುಟ್ಟಕ್ಕನ ಮಕ್ಕಳು ರಾಜಿ ಮಾಯವಾಗಿಬಿಟ್ಟಳು. ದಿಢೀರ್​ ಎಂದು ಪುಟ್ಟಕ್ಕನ ಮಕ್ಕಳು ರಾಜಿ ಕಾಣೆಯಾಗಿಬಿಟ್ಟಿದ್ದಳು. ಸವತಿ ಪಾತ್ರಕ್ಕೆ ಜೀವ ತುಂಬಿದ್ದ ರಾಜಿ ಪಾತ್ರಧಾರಿ ಹಂಸಾ ಅವರನ್ನು ಕಾಣದೇ ಅಭಿಮಾನಿಗಳು ಶಾಕ್​ ಆಗಿದ್ದಂತೂ ದಿಟ.

ಇವೆಲ್ಲಾ ಸದ್ಯ ತಣ್ಣಗಾಗುತ್ತಿದ್ದಂತೆಯೇ, ಹಂಸಾ ಅವರು ಇದೀಗ ಸ್ಮಶಾನದಲ್ಲಿ ಓಡಾಡಿದ್ದಾರೆ. ಅದರ ವಿಡಿಯೋ ಶೇರ್​ ಮಾಡಿದ್ದಾರೆ. ಸಮಾಧಿಗಳನ್ನು ನೋಡುತ್ತಲೇ ಭಾವುಕರಾಗಿರುವ ನಟಿ, ಜೀವನದ ಪಾಠ, ಜೀವನದ ಮೌಲ್ಯಗಳನ್ನು ಅರ್ಥ ಮಾಡಿಸಿದ್ದಾರೆ. ಬದುಕಿನ ಅತಿದೊಡ್ಡ ಸತ್ಯವನ್ನು ಅವರು ಹೇಳಿದ್ದಾರೆ. ಇದು ಎಲ್ಲರಿಗೂ ತಿಳಿದಿರುವ ಸತ್ಯವೇ ಆಗಿದ್ದರೂ, ಬದುಕಿನ ಜಂಜಾಟದಲ್ಲಿ ಅದನ್ನು ಮರೆತು ಮತ್ತದೇ ತಪ್ಪು ಮಾಡುವುದು ಮಾನವಸಹಜ ಗುಣವಾಗಿಬಿಟ್ಟಿದೆ. ಬದುಕು ಎನ್ನುವುದು ಮೂರು ದಿನಗಳ ಬಾಳು ಎನ್ನುವುದು ತಿಳಿದಿದ್ದರೂ ಜೀವನದಲ್ಲಿ ಅದೇನು ಕನಸು, ಅದೇನು ವ್ಯಾಮೋಹ, ತನ್ನದು, ತನ್ನವರು, ಎಲ್ಲವೂ ನನಗೇ ಬೇಕು ಎನ್ನುವ ಭಾವ, ಜಗಳ, ಹತಾಶೆ... ಅಬ್ಬಬ್ಬಾ.. ಒಂದಾ... ಎರಡಾ..? ಇದರ ಬಗ್ಗೆಯೇ ಹಂಸಾ ಅವರು ಈಗ ಮಾತನಾಡಿದ್ದಾರೆ. 

 ಬದುಕಿರುವವರೆಗೆ ನಾನು, ನನ್ನದು ಎನ್ನುತ್ತಲೇ ಇರುತ್ತೇವೆ. ಸತ್ತ ಮೇಲೆ ಮನೆಯಲ್ಲಿಯೂ ಜಾಗ ಇರುವುದಿಲ್ಲ. ಊರಾಚೆ  ಇರುವ ಸ್ಮಶಾನದಲ್ಲಿ ತಂದು ಹಾಕುತ್ತಾರೆ. ಬದುಕಿರುವಾಗಿ ಬೇರೆಯವರು ಹಾಳಾಗಲಿ, ನಾವು ಹೇಗೆ ಉದ್ಧಾರ ಆಗಬೇಕು ಎಂದೇ ಕಾಯುತ್ತಿರುತ್ತೇವೆ ಎನ್ನುವ ಮೂಲಕ ಬದುಕು ಎಂದರೇನು ಎನ್ನುವ ಬಗ್ಗೆ ಸೂಕ್ಷ್ಮವಾಗಿ ನಟಿ ಹಂಸಾ ವಿವರಿಸಿದ್ದಾರೆ. ಆದರೆ ನಟಿಗೆ ಏಕಾಏಕಿ ಏನಾಯಿತು ಎನ್ನುವ ಚಿಂತೆ ಅಭಿಮಾನಿಗಳಲ್ಲಿ ಕಾಡುತ್ತಿದೆ! 

ಆದರೂ ಸಹ ಹಂಸ ಅವರು ಹೇಳಿದ ಮಾತು ಎಷ್ಟು ಸತ್ಯ ಅನ್ನಿಸುತ್ತೆ ಅಲ್ಲವಾ . ಇದನ್ನು ನೋಡಿ ಎಲ್ಲರೂ ಪಾಠ ಕಲಿತರೆ ಒಳ್ಳೆಯದು  . ಈ ಲೇಖನ ನಿಮಗೆ ಇಷ್ಟ ಆಗಿದ್ರೆ ಲೈಕ್ ಮಾಡಿ ಹಾಗು ಶೇರ್ ಮಾಡಿ ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ