ಕಿಚ್ಚನ ಪಂಚಾಯತಿ ಸರಿ ಇಲ್ಲ ಎಂದು ಬಾಯಿಗೆ ಬಂದಂತೆ ಬೈದ ಚೈತ್ರ ? ಇದು ಎಷ್ಟು ಸರಿ

ಕಿಚ್ಚನ ಪಂಚಾಯತಿ ಸರಿ ಇಲ್ಲ ಎಂದು ಬಾಯಿಗೆ ಬಂದಂತೆ ಬೈದ ಚೈತ್ರ ? ಇದು ಎಷ್ಟು ಸರಿ

ಜಗದೀಶ್ ಮತ್ತು ರಣಜಿತ್ ಅವರನ್ನು ಬಿಗ್ ಬಾಸ್ ಶೋನಿಂದ ಹೊರಹಾಕಿದ ನಂತರ, ಸುದೀಪ್ ಅವರು ಎಲ್ಲಾ ಸ್ಪರ್ಧಿಗಳಿಗೆ  ಸರಿಯಾಗಿ ಕ್ಲಾಸ್ ತೆಗೆದು ಕೊಂಡರು . "ಜಗದೀಶ್ ಮಹಿಳಾ ಸ್ಪರ್ಧಿಗಳನ್ನು ನಿಂದಿಸಿದ್ದಾರೆ, ಆದರೆ ನೀವು ಎಲ್ಲರೂ ಏನು ಮಾಡಿದ್ದೀರಿ?" ಎಂದು ಪ್ರಶ್ನಿಸಿದರು. ವಿಶೇಷವಾಗಿ ಚೈತ್ರಾ ಅವರನ್ನು ಉದ್ದೇಶಿಸಿ, "ನೀವು ಮಹಿಳೆಯರಿಗೆ ಗೌರವ ನೀಡುತ್ತಿದ್ದೀರಾ?" ಎಂದು ಕೇಳಿದರು. "ನೀವು ನಿಮ್ಮ ತಂದೆಗೆ ಹುಟ್ಟಿದ್ದರೆ ನನ್ನ ಮುಂದೆ ಬಂದು ಮಾತನಾಡಿ" ಎಂಬ ಮಾತುಗಳನ್ನು ಬಳಸಿದ ಚೈತ್ರಾ ಅವರನ್ನು ಸುದೀಪ್ ಗದರಿಸಿದರು. "ಇದು ತಂದೆಗೆ ಅವಮಾನವಲ್ಲ, ಆದರೆ ನೀವು ತಾಯಿಯನ್ನು ಅವಮಾನಿಸುತ್ತಿದ್ದೀರಿ. ಇದು ತುಂಬಾ ಕೆಟ್ಟದು. ಮೊದಲು ನೀವು ಮಹಿಳೆಯರಿಗೆ ಗೌರವ ನೀಡಿ, ನಂತರ ನಿಮ್ಮನ್ನು ಗೌರವಿಸಲು ಕೇಳಿ" ಎಂದು ಹೇಳಿದರು.
ಕಿಚ್ಚ ಸುದೀಪ್  ಅವರು ಮನೆಯಿಂದ ಹೊರಗೆ ಹೋದವರು ಮಾತ್ರವೇ ತಪ್ಪು ಮಾಡಿಲ್ಲ, ಒಳಗೆ ಇರುವವರು ಏನೆಲ್ಲಾ ತಪ್ಪನ್ನ ಮಾಡಿದ್ದಾರೆನ್ನುವುದನ್ನು ಸೂಕ್ಷ್ಮವಾಗಿ ವಿವರಿಸಿ ಹೇಳಿದ್ದಾರೆ.

ಆದರೆ, ಶೋ ಮುಗಿದ ನಂತರ, ಚೈತ್ರಾ ಅವರು ಸುದೀಪ್ ಅವರನ್ನು ಟೀಕಿಸಿದರು. "ಜಗದೀಶ್ ಅವರಿಗೆ ಕ್ಲೀನ್ ಚಿಟ್ ನೀಡಿದ್ದು, ಉಳಿದ ಎಲ್ಲಾ ಸ್ಪರ್ಧಿಗಳನ್ನು ವಿಲನ್ ಆಗಿ ತೋರಿಸುತ್ತಿದ್ದಾರೆ" ಎಂದು ಆರೋಪಿಸಿದರು. ವೀಕೆಂಡ್ ಎಪಿಸೋಡ್ ಜನರ ಮುಂದೆ ಮನೆಯಲ್ಲಿ ಇರೋರನ್ನ ವಿಲನ್ ಗಳಂತ ತೋರಿಸಿದೆ ಎಂದಿದ್ದಾರೆ. ಅಲ್ಲದೇ ಜನ ಸುದೀಪ್ ಅವರು ಹೇಳಿದ ಬೇರೆ ವಿಚಾರಗಳನ್ನು ನೆನಪಿಟ್ಟುಕೊಳ್ಳಲ್ಲ, ನಮ್ಮ ಬಗ್ಗೆ ಹೇಳಿದ ವಿಚಾಎ ಮಾತ್ರ ನೆನಪಿಟ್ಟುಕೊಳ್ತಾರೆ ಎಂದು ಹೇಳಿದ್ದಾರೆ

ನಾನಾಡಿದ ಮಾತು ತಪ್ಪೆಂದು ಕ್ಷಮೆ ಕೇಳಿದ ಚೈತ್ರಾ ಕುಂದಾಪುರ ಅವರು ವೀಕೆಂಡ್ ಪಂಚಾಯ್ತಿ ಮುಗಿದ ಮೇಲೆ ಅನುಷಾ ಮತ್ತು ಮಾನಸ ಜೊತೆ ವೀಕೆಂಡ್ ಎಪಿಸೋಡ್ ಬಗ್ಗೆಯೇ ಟೀಕೆ ಮಾಡುವಂತೆ ಮಾತನಾಡಿದ್ದಾರೆ. ವೀಕೆಂಡ್ ಎಪಿಸೋಡ್ ಜಗದೀಶ್ ಅವರಿಗೆ ಕ್ಲೀನ್ ಚಿಟ್ ಕೊಡೋ ಹಾಗಿತ್ತು ಎಂದಿದ್ದಾರೆ.

ಮುಂದಿನ ಶನಿವಾರದ ಶೋನಲ್ಲಿ ಸುದೀಪ್ ಅವರ ಪ್ರತಿಕ್ರಿಯೆ ಏನಾಗುತ್ತದೆ ಎಂಬುದನ್ನು ನೋಡಲು ಪ್ರೇಕ್ಷಕರು ಕಾತರರಾಗಿದ್ದಾರೆ. ಈ ಘಟನೆ ಬಿಗ್ ಬಾಸ್ ಮನೆಯಲ್ಲಿ ಮತ್ತು ಹೊರಗಿನ ಪ್ರೇಕ್ಷಕರಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.  ( video credit :review Kannadiga )